ಮಂಗಳವಾರ, ಜುಲೈ 24, 2012

ಗೆಳೆಯ Venkatesh Prasad ಅವರ "ಸಂಕಲ್ಪ"ದ ಬಗೆಗಿನ ಅನಿಸಿಕೆಗಳು.


ನಿನ್ನೆಯಷ್ಟೇ 'ಸಂಕಲ್ಪ' ಓದಿ ಮುಗಿಸಿದೆ . ತುಂಬಾ ಸೊಗಸಾಗಿತ್ತು , ಅಲ್ಲಲ್ಲಿ ಬರುವ ಉತ್ತರ ಕರ್ನಾಟಕದ ಸಂಭಾಷಣೆಗಳು ಆರಂಭದಲ್ಲಿ ತುಸು ಕಷ್ಟವೆನಿಸಿದರೂ ನಂತರ ಅದೇ ನನ್ನ ಓದಿಸಿಕೊಂಡು ಹೋಯಿತು. ನಾನೂ ಇಲ್ಲಿಯವರೆಗೆ ಬಹಳಷ್ಟು ಅಂತರ್ಜಾತೀಯ ವಿವಾಹಗಳನ್ನು ನನ್ನ ನೆರೆಕರೆಯಲ್ಲಿ ನೋಡಿದ್ದೇನೆ ಮತ್ತು ಕೇಳಿದ್ದೇನೆ ಅವುಗಳಲ್ಲಿ ಬಹುತೇಕವು ಮದುವೆಯ ಮೊದಲೇ ಮುರಿದು ಬಿದ್ದರೆ ಇನ್ನು ಕೆಲವು ಮದುವೆಯ ನಂತರ . ಅಂತಹುದರಲ್ಲಿ ನಮನ ಮತ್ತು ತಮನ್ನಾರ ವಿವಾಹವು ಬಹಳ ವಿಶಿಷ್ಟವಾಗಿ ಕಾಣಿಸಿತು. 
ಮೊದಮೊದಲು ಬರಿಯ ಲವ್ ಸ್ಟೋರಿ ಯ ಪುಸ್ತಕ ಎಂದುಕೊಂಡವನಿಗೆ ಓದುತ್ತ ಓದುತ್ತ ಬಹಳಷ್ಟು ಕುತೂಹಲಕಾರಿ ಅಂಶಗಳು ಕಲಿಯ ಸಿಕ್ಕವು :
>ಕಥೆಯ ಮಧ್ಯದಲ್ಲಿ ಬರುವ 'ಸಾಮ್ರಾಟ' ನಂತೂ ನನಗೆ ಬಹಳಷ್ಟು ಹಿಡಿಸಿದ ಮತ್ತು ಅವನ ಜೊತೆ ಬರುವ ಸುಮಿತ ಹಾಗೂ ಅಭಿಷೇಕರೂ ಕೂಡ. ಕೆಲಸವಾದ ತಕ್ಷಣ ಮರೆತು ಬಿಡುವ ಈ ಕಾಲದಲ್ಲಿ ತಾವು ಪೆಟ್ಟು ತಿಂದರೂ ತಮ್ಮ ಮಿತ್ರನ ಒಳಿತಿಗಾಗಿ ಶ್ರಮ ಪಡುವವರನ್ನು ಕಂಡು ಖುಷಿಯಾಯಿತು.

> ಬರಿಯ ಪ್ರೇಮಿಗಳಿಗೆ ಮಾತ್ರವಲ್ಲ , ಜೀವನದಲ್ಲಿ 'ಸೋತೆವು' ಎಂದು ಕೊಳ್ಳುವ ಎಲ್ಲರೂ ಓದಬೇಕಾದ ಒಂದು ಒಳ್ಳೆಯ ಪುಸ್ತಕ ಇದು.>ನಡು ನಡುವೆ ಉಡುಪಿಯ ಕೆಲ ದೃಶ್ಯಗಳನ್ನ ತುಂಬಾ ಚೆನ್ನಾಗಿ ತೋರಿಸಿಕೊಟ್ಟಿದ್ದೀರಿ ಅದಕ್ಕಾಗಿ ಧನ್ಯವಾದಗಳು.!!>ಜೀವನದಲ್ಲಿ ಗೆಳೆಯರ ಮಹತ್ವವನ್ನು ಈ ಪುಸ್ತಕ ತೋರಿಸಿಕೊಡುತ್ತದೆ. 
ಇವಿಷ್ಟು ನನಗನ್ನಿಸಿದ ಕೆಲ ಅಂಶಗಳು , ಇಂತಹ ಒಳ್ಳೆಯ ಕೃತಿಗಾಗಿ ಧನ್ಯವಾದಗಳು , ನಿಮ್ಮಿಂದ ಇನ್ನಷ್ಟು ಕೃತಿಗಳು ಹೊರಬರಲಿ , ಕನ್ನಡದ ಶ್ರೇಷ್ಠ ಲೇಖಕರ ಸಾಲಲ್ಲಿ ನೀವು ಕೂಡ ಸೇರಿರಿ ಎಂಬುದೇ ನನ್ನ ಹಾರೈಕೆ !!
ಇಂತೀ ನಿಮ್ಮವ,
ವೆಂಕಟೇಶ ಪ್ರಸಾದ [ಉಡುಪಿಯಿಂದ]

1 ಕಾಮೆಂಟ್‌:

Badarinath Palavalli ಹೇಳಿದರು...

ಈ ಪುಸ್ತಕವನ್ನು ನಾನೂ ಕೊಂಡು ಓದಬೇಕು ಸಾರ್. ಒಳ್ಳೆಯ ಬರಹ.

ನನ್ನ ಬ್ಲಾಗಿಗೂ ಸ್ವಾಗತ.